Daasa's Gift

service
  • ಪುರಂದರ ದಾಸರು ಕನ್ನಡಿಗರ ಹೆಮ್ಮೆಯ ಪುರುಷರು ಮತ್ತು ಲೋಕ ಪ್ರಿಯರು.  ಧರೆಗಿಳಿದು ಬಂದ ನಾರದ ಮುನಿಗಳು, ಕರ್ನಾಟಕ ಸಂಗೀತ ಪಿತಾಮಹರು.
  • ದಾಸರು ತಮ್ಮದೇ ಆದ ಶೈಲಿಯಲ್ಲಿ ವೇದ, ಉಪನಿಷತ್ತು, ಭಗವದ್ಗೀತೆ, ಪುರಾಣಗಳ ತತ್ವಗಳನ್ನು ಸುಲಭ ಮಾರ್ಗದಲ್ಲಿ, ನಮ್ಮ ಸಂಸ್ಕೃತಿಗೆ ತಕ್ಕಂತೆ, ಸರ್ವ ಕಾಲಕ್ಕೂ ಅನುಗುಣವಾಗುವಂತೆ, ಜನಸಾಮಾನ್ಯರಿಗೂ ಅರ್ಥವಾಗುವಂತೆ ಕೀರ್ತನೆಗಳಲ್ಲಿ, ಪದಗಳಲ್ಲಿ, ಉಗಾಭೋಗಗಳಲ್ಲಿ, ಮುಂಡಿಗೆಗಳಲ್ಲಿ ಮತ್ತು ಸುಳಾದಿಗಳಲ್ಲಿ ತಿಳಿಸಿದ್ದಾರೆ.   
  • ಕೀರ್ತನೆಗಳಲ್ಲಿ ಲೌಕಿಕದ ನಶ್ವರತೆಯನ್ನೂ ಪಾರಮಾರ್ಥಿಕದ  ಮಹತ್ವವನ್ನೂ ಸೊಗಸಾಗಿ ಚಿತ್ರಿಸಿದ್ದಾರೆ.
  • ನಿತ್ಯ ಜೀವನದಲ್ಲಿ ಆಧ್ಯಾತ್ಮವನ್ನು ಕಂಡುಕೊಂಡು, ದೇವರ ಚಿಂತನೆ ಮಾಡಿಕೊಂಡು, ಸಂಸಾರದಲ್ಲಿದ್ದುಕೊಂಡು ಸಾಧನೆ ಮಾಡುವ ಮಾರ್ಗವನ್ನು ತೋರಿಸಿದ್ದಾರೆ.
  • ಇವುಗಳನ್ನು ಒಳ್ಳೆಯ ಕಾವ್ಯ ರೂಪದಲ್ಲಿಒಳ್ಳೆಯ ಪ್ರಾಸದಲ್ಲಿ ಒಳ್ಳೊಳ್ಳೆಯ ರಾಗ ತಾಳ ಗಳಲ್ಲಿ ಓದಲು ಇಷ್ಟವಾಗುವಂತೆ, ಕೇಳಲು ಇಂಪಾಗಿರುವಂತೆ, ಅನುಗಾಲವೂ, ಸರ್ವರಿಗೂ ಒಪ್ಪುವಂತೆ ಸುಲಭವಾಗಿ ಅರ್ಥೈಸಿಕೊಳ್ಳುವಂತೆ ಹೇಳಿದ್ದಾರೆ. 
  • ಇವರು ಹಾಕಿ ಕೊಟ್ಟಿರುವ ಸಾಹಿತ್ಯ ಮತ್ತು ಸಂಗೀತ ಮಾರ್ಗ ಮುಂದಿನ ಪೀಳಿಗೆಗಳಿಗೆ ದಾರಿ ದೀಪವಾಗಿದೆ. 
  • ಇವರ ಹೆಜ್ಜೆ ಗುರುತನ್ನ ಅನುಸರಿಸಿ ಬಂದಂತಹ ಮುಂದಿನ ವಾಗ್ಗೇಯಕಾರರ ರಚನೆಗಳನ್ನ ಗಮನಿಸಿದಾಗ ಇವರು ಕೊಟ್ಟಂತಹ ಕೊಡುಗೆ ಅಪಾರ ಎಂದು ನಮಗೆ ಚೆನ್ನಾಗಿ ಮನದಟ್ಟಾಗುತದೆ.
  • ಗುರುಗಳಾದ ಶ್ರೀ ವ್ಯಾಸರಾಯರು ಅವರ ಸಾಹಿತ್ಯವನ್ನು ಉಪನಿಷತ್ತಿಗೆ ಹೋಲಿಸಿ ಅದಕ್ಕೆ “ಪುರಂದರ ಉಪನಿಷತ್” ಎಂದು ಹೆಸರಿಟ್ಟಿದ್ದರು ಹಾಗೂ ತಮ್ಮ ವ್ಯಾಸಪೀಠದಲ್ಲಿಟ್ಟಿದ್ದರು.
  • ಶ್ರೀವಿಜಯದಾಸರು *ಗುರು ಪುರಂದರದಾಸರೇ ನಿಮ್ಮ ಚರಣಕಮಲವ ನಂಬಿದೆ, ಗರುವ ರಹಿತರ ಮಾಡಿ ಎಮ್ಮನು ಪೊರೆವ ಭಾರವು ನಿಮ್ಮದೆ – ಎಂದು ಬೇಡಿದ್ದಾರೆ. ನಾವೂ ದಾಸ ಶ್ರೇಷ್ಠರಾದ ದಯಾನಿಧಿಗಳನ್ನು ಸ್ಮರಿಸೋಣ.
  • ಅವರ ಪ್ರತಿಪಾದನೆಗೆ ಶ್ರೀ ಮಧ್ವಾಚಾರ್ಯರ ದ್ವೈತ ಸಿದ್ಧಾಂತವೇ ಪ್ರಮುಖವಾದ ಅಡಿಗಲ್ಲು. 
  • ಶ್ರೀ ಹರಿಯು ಸರ್ವೋತ್ತಮನೆಂದೂ ಮತ್ತು ಶ್ರೀ ಕೃಷ್ಣನಲ್ಲಿ ಅಂದರೆ ಪರಮಾತ್ಮನಲ್ಲಿ ಜ್ಞಾನ, ಭಕ್ತಿ, ಅನುರಾಗ, ನಿಶ್ಚಲವಾದ ಸ್ನೇಹ, ಪ್ರೀತಿಯೇ ಸಾಧನೆಯ ದಿವ್ಯ ಮಾರ್ಗವಾಗಿದೆಯೆಂದು ತೋರಿಸಿದ್ದಾರೆ.
  • ಇದರಿಂದ ಶ್ರೀ ಸಾಮನ್ಯನು ಶುದ್ಧ ಜೀವನವನ್ನು ಇನ್ನೊಬ್ಬರಿಗೆ ಭಾರವಾಗದ ರೀತಿಯಲ್ಲಿ, ಸುಗಮವಾಗಿ ಮತ್ತು ನೆಮ್ಮದಿಯಿಂದ ಬದುಕಬಹುದೆಂದು ಸಾರಿ ಸಾರಿ ಹೇಳಿದ್ದಾರೆ. 
  • *ಶ್ರೀಹರಿ* ಯನ್ನು ನೆನೆದರೆ ಎಲ್ಲ ದೋಷವೂ ದೂರ ಎಂದು ಸಾರಿದ ಮಹಾನುಭಾವರಿಗೆ ನಮ್ಮ *ಶತಕೋಟಿ ನಮನ*….