ಅವರ ಜೀವನದ ಹೆಚ್ಚಿನ ವಿವರಗಳು ನಮಗೆ ಹೀಗೇ ಇದ್ದಿರಬೇಕೆಂದು ತಿಳಿಯುವುದಿಲ್ಲ. ಅವರು ಹುಟ್ಟಿದ ದಿನವೇ ಆಗಲಿ, ಅಥವಾ ಅವರು ವ್ಯಾಸತೀರ್ಥರ ಶಿಷ್ಯರಾಗಿ ಹರಿದಾಸ ದೀಕ್ಷೆಯನ್ನು ತೆಗೆದುಕೊಂಡ ದಿನವೂ ಯಾವುದೆಂದು ಖಡಾಖಂಡಿತವಾಗಿ ಹೇಳಲಾಗದು.
ಆ ಪದ ಹೀಗಿದೆ:
ತೆರಳಿದರು ಹರಿಪುರಕಿಂದು || ಪಲ್ಲವಿ ||
ಪುರಂದರ ದಾಸ ರಾಯರು ದೀನಬಂಧು || ಅನುಪಲ್ಲವಿ ||
ರಕ್ತಾಕ್ಷಿವತ್ಸರ ಪುಷ್ಯಾಂತ ರವಿವಾರ
ಮುಕ್ತಿಗೈದಿದರು ಕೇಳಿ ಬುಧ ಜನರು || ೧ ||
ವಿರೂಪಾಕ್ಷ ಕ್ಷೇತ್ರದಿ ವಿಠಲನ್ನ ಸನ್ನಿಧಿಯಲ್ಲಿ
ಶರೀರವನಿರಿಸಿ ಅನಾಥರನು ಹರಸಿ || ೨ ||
Indian P & T Department, in memory of Purandara Dasa on his 400 th Death Anniversary, issued a commemorative postal stamp on Jan 14, 1964..